Monday, July 11, 2016

ಚಾಣಕ್ಯ ನೀತಿ


ಚಾಣಕ್ಯ ನಿಜಾರ್ಥದಲ್ಲಿ ಬ್ರಾಹ್ಮಣ ಕಾರಣ ಆತ ಸದಾ ರಾಷ್ಟ್ರದ ಒಳಿತಿಗಾಗಿ ಯೋಚನಾಮಗ್ನ, ಆತ ಗುರುಕುಲದಲ್ಲಿ ಆಚಾರ್ಯನಾಗಿದ್ದರ್ರಿಂದ ಅವನಿಗೆ ಎಲ್ಲರೂ ಸಮಾನರೇ. ರಾಷ್ಟ್ರಭಕ್ತಿ ರಕ್ತದ ಕಣಕಣದಲ್ಲಿ ಹರಡಿಕೊಂಡಿದ್ದರಿಂದ ರಾಷ್ಟ್ರದ ಘನತೆ-ಗೌರವಗಳೊಂದಿಗೆ ಯಾವ ರಾಜಿಗೂ ಆತ ಸಿದ್ದನಿರಲಿಲ್ಲ.ಅದಕ್ಕೆ ಆತ ಕಠಿಣ ಹೃದಯಿ ಅಂತ ಅನೇಕರಿಗೆ ಅನ್ನಿಸೋದು.ಇಷ್ಟಕ್ಕೂ ಚಾಣಕ್ಯದ್ದೆಂದೇ ಹೇಳಲಾಗುವ ಮಾತೊಂದಿದೆ

ತ್ಯಜೇದೇಕಂ ಕುಲಸ್ಯಾರ್ಥೇ, ಗ್ರಾಮಸ್ಯಾರ್ಥೇ ಕುಲಂ ತ್ಯಜೇತ್ |
ಗ್ರಾಮಂ ಜನಪದಸ್ಯಾರ್ಥೇ ಆತ್ಮಾರ್ಥೇ ಪೃಥಿವೀ ತ್ಯಜೇತ್ ||

Sunday, July 10, 2016

148ನೆಯ ಅಧ್ಯಾಯ ಪ್ರಲಂಭನದಲ್ಲಿ ಔಷಧಿ ಮತ್ತು ಮಂತ್ರಗಳ ಪ್ರಯೋಗ

(ರಾತ್ರಿ ಮತ್ತು ಕತ್ತಲೆಯಲ್ಲಿ ಪದಾರ್ಥಗಳು ಕಾಣಿಸುವ ಯೋಗಗಳು)
ಬೆಕ್ಕು,ಒಂಟೆ ,ತೋಳ,ಹಂದಿ ,ನಾಯಿ ,ಹುಲಿ ,ವಾಗಲೀ ಎಂಬ ಹಕ್ಕಿ ,ವಿಷ್ಕಿರ ,ಕಾಗೆ ,ಗೂಬೆ ಮತ್ತು  ಇತರ ರಾತ್ರಿ ಸಂಚಾರಿಗಳಾದ ಪ್ರಾಣಿಗಳ ಬಲದ ಅಥವಾ ಎಡದ  ಕಣ್ಣುಗಳನ್ನು ತೆಗೆದುಕೊಂಡು, ಎರಡು  ವಿಧವಾಗಿ  ಚೂರ್ಣ ಮಾಡಬೇಕು . ಅನಂತರ  ಬಲಕಣ್ಣಿನ  ಚೂರ್ಣವನ್ನು  ಎಡಕಣ್ಣಿನ ಚೂರ್ಣವನ್ನು ಬಲಕಣ್ಣಿಗೂ ಹಚ್ಚಿಕೊಂಡರೆ,ರಾತ್ರಿಯಲ್ಲಿ  ಮತ್ತು ಕತ್ತಲೆಯಲ್ಲಿ ವಸ್ತುಗಳನ್ನು ನೋಡುವನು .
ಏಕಾಮ್ಲಕಂ ವರಾಹಾಕ್ಷಿ ಖದ್ಯೋತಃ ಕಾಲಶಾರವಾ |
ಏತೇನಾಭ್ಯಕ್ತನನೋ ರಾತ್ರೌ ರೂಪಾಣಿ ಪಶ್ಯತಿ ||೩೫೧||
ನಿಂಬೆಯ  ಹಣ್ಣು,  ಹಂದಿಯ ಕಣ್ಣು ,ಮಿಂಚುಹುಳು ,ಕಾಲಶಾರಿವಾ ಎಂಬ ಔಷಧಿ, ಇವುಗಳ ಅಂಜನವನ್ನು ಕಣ್ಣಿಗೆ ಲೇಪಿಸಿಕೊಂಡರೆ ರಾತ್ರಿಹೊತ್ತು  ರೂಪಗಳನ್ನು ನೋಡುವನು.