Monday, July 11, 2016

ಚಾಣಕ್ಯ ನೀತಿ


ಚಾಣಕ್ಯ ನಿಜಾರ್ಥದಲ್ಲಿ ಬ್ರಾಹ್ಮಣ ಕಾರಣ ಆತ ಸದಾ ರಾಷ್ಟ್ರದ ಒಳಿತಿಗಾಗಿ ಯೋಚನಾಮಗ್ನ, ಆತ ಗುರುಕುಲದಲ್ಲಿ ಆಚಾರ್ಯನಾಗಿದ್ದರ್ರಿಂದ ಅವನಿಗೆ ಎಲ್ಲರೂ ಸಮಾನರೇ. ರಾಷ್ಟ್ರಭಕ್ತಿ ರಕ್ತದ ಕಣಕಣದಲ್ಲಿ ಹರಡಿಕೊಂಡಿದ್ದರಿಂದ ರಾಷ್ಟ್ರದ ಘನತೆ-ಗೌರವಗಳೊಂದಿಗೆ ಯಾವ ರಾಜಿಗೂ ಆತ ಸಿದ್ದನಿರಲಿಲ್ಲ.ಅದಕ್ಕೆ ಆತ ಕಠಿಣ ಹೃದಯಿ ಅಂತ ಅನೇಕರಿಗೆ ಅನ್ನಿಸೋದು.ಇಷ್ಟಕ್ಕೂ ಚಾಣಕ್ಯದ್ದೆಂದೇ ಹೇಳಲಾಗುವ ಮಾತೊಂದಿದೆ

ತ್ಯಜೇದೇಕಂ ಕುಲಸ್ಯಾರ್ಥೇ, ಗ್ರಾಮಸ್ಯಾರ್ಥೇ ಕುಲಂ ತ್ಯಜೇತ್ |
ಗ್ರಾಮಂ ಜನಪದಸ್ಯಾರ್ಥೇ ಆತ್ಮಾರ್ಥೇ ಪೃಥಿವೀ ತ್ಯಜೇತ್ ||
ತನ್ನ ಕುಟುಂಬದ ಕುಲದ ರಕ್ಷಣೆಗಾಗಿ ವ್ಯಕ್ತಿಯಬ್ಬನ ಸಖ್ಯ ಬಿಡಬೇಕಾದ ಪ್ರಸಂಗ ಬಂದರೆ: ಊರಿನ ಉನ್ನತಿಗಾಗಿ, ಒಳಿತಿಗಾಗಿ ತನ್ನ ಪರಿವರವನ್ನೋ, ಕುಲವನ್ನು ಬಿಡಬೇಕಾಗಿ ಬಂದರೆ ಮತ್ತು ಕೊನೆಗೆ ಆತ್ಮೋನ್ನತಿಗಾಗಿ ಭೂಮಿಯನ್ನೇ ಬಿಡಬೇಕಾಗಿ ಬಂದರೂ ಮುಲಾಜಿಲ್ಲದೆ ಬಿಡಬೇಕಂತೆ.

ಚಾಣಕ್ಯನಂತೂ ಆರ್ಯಾವರ್ತವನ್ನು ಮತ್ತೆ ಸಂಘಟಿಸುವಲ್ಲಿ ಕಟಿಬದ್ದನಾಗಿದ್ದ, ಆತನಿಗೆ ವ್ಯಕ್ತಿ ಜಾತಿ, ಕುಲ, ಮನೆ-ಮಠ, ಊರು-ಕೇರಿ, ಭಂಧು-ಬಳಗ ಎಲ್ಲಕ್ಕಿಂತಲೂ ಮಿಗಿಲಾಗಿ ಅವನ ಕಣ್ಣಿಗೆ ಕಾಣುತಿದ್ದುದು ಕೇವಲ ರಾಷ್ಟ್ರದ ಉನ್ನತಿ. ಈ ಬಗೆಯ ಮಾನಸಿಕ ಸ್ಥಿತಿಯಿಂದ ರೂಪಗೊಂಡವರು ಮಾತ್ರ ದೇಶ ಮತ್ತು  ರಾಜ್ಯಗಳನಾಳಲು ಯೋಗ್ಯರು. ಅಮ್ಮತ್ಯ ರಾಕ್ಷಸನದು ಚಾಣಕ್ಯನ ವಿರುದ್ದ ವ್ಯಕ್ತಿತ್ವ. ಆತ ಕೂಡ ಸಮರ್ಥ, ಪ್ರತಿಭಾಸಂಪನ್ನ ಆದರೆ ನಿಷ್ಠೆ ಮಾತ್ರ ದುಷ್ಟ ರಾಜನಿಗೆ. ಅಂಥವರು ಯಾವಾಗಲೂ ಇರುತ್ತಾರೆ. ಅವರು ದೇಶವನ್ನು ಪ್ರಗತಿಯ ಹಾದಿಯಲ್ಲಿ ಒಯ್ಯಬಲ್ಲ ಎಲ್ಲ ಶಕ್ತಿಯನ್ನು ತಮ್ಮೊಳಗಿರಿಸಿಕೊಂಡೂ ದೇಶಕ್ಕಿಂತಲೂ ಮಿಗಿಲಾಗಿ ಒಂದು ಪರಿವಾರಕ್ಕೋ, ಒಬ್ಬ ವ್ಯಕ್ತಿಗೋ ನಿಷ್ಠರಾಗಿ ದೇಹ-ಜೀವವನ್ನು ಸವೆಸಿ ಬಿಡುತ್ತಾರೆ. ಕಾಲಗರ್ಭದಲ್ಲಿ ಇವರೆಲ್ಲಾ ಅಮಾತ್ಯ ರಾಕ್ಷಸರಾಗಿ ನಂದರ ಅಡಿಯಾಳುಗಳಂತೆ ಗುರುತಿಸಲ್ಪಡುಬಹುದೇ ಹೊರತು ದೇಶಭಕ್ತ ಚಾಣಕ್ಯ-ಚಂದ್ರಗುಪ್ತ ಮೌರ್ಯ-ಅಶೋಕರಂತಲ್ಲ !
ಮೂಲ: ಚಕ್ರವರ್ತಿ ಸೂಲಿಬೆಲೆ ಅವರ ಆಯ್ದ ಅಂಕಣದಿಂದ

No comments:

Post a Comment