(ರಾತ್ರಿ ಮತ್ತು ಕತ್ತಲೆಯಲ್ಲಿ ಪದಾರ್ಥಗಳು ಕಾಣಿಸುವ ಯೋಗಗಳು)
ಬೆಕ್ಕು,ಒಂಟೆ ,ತೋಳ,ಹಂದಿ ,ನಾಯಿ ,ಹುಲಿ ,ವಾಗಲೀ ಎಂಬ ಹಕ್ಕಿ ,ವಿಷ್ಕಿರ ,ಕಾಗೆ ,ಗೂಬೆ ಮತ್ತು ಇತರ ರಾತ್ರಿ ಸಂಚಾರಿಗಳಾದ ಪ್ರಾಣಿಗಳ ಬಲದ ಅಥವಾ ಎಡದ ಕಣ್ಣುಗಳನ್ನು ತೆಗೆದುಕೊಂಡು, ಎರಡು ವಿಧವಾಗಿ ಚೂರ್ಣ ಮಾಡಬೇಕು . ಅನಂತರ ಬಲಕಣ್ಣಿನ ಚೂರ್ಣವನ್ನು ಎಡಕಣ್ಣಿನ ಚೂರ್ಣವನ್ನು ಬಲಕಣ್ಣಿಗೂ ಹಚ್ಚಿಕೊಂಡರೆ,ರಾತ್ರಿಯಲ್ಲಿ ಮತ್ತು ಕತ್ತಲೆಯಲ್ಲಿ ವಸ್ತುಗಳನ್ನು ನೋಡುವನು .
ಏಕಾಮ್ಲಕಂ ವರಾಹಾಕ್ಷಿ ಖದ್ಯೋತಃ ಕಾಲಶಾರವಾ |
ಏತೇನಾಭ್ಯಕ್ತನನೋ ರಾತ್ರೌ ರೂಪಾಣಿ ಪಶ್ಯತಿ ||೩೫೧||
ನಿಂಬೆಯ ಹಣ್ಣು, ಹಂದಿಯ ಕಣ್ಣು ,ಮಿಂಚುಹುಳು ,ಕಾಲಶಾರಿವಾ ಎಂಬ ಔಷಧಿ, ಇವುಗಳ ಅಂಜನವನ್ನು ಕಣ್ಣಿಗೆ ಲೇಪಿಸಿಕೊಂಡರೆ ರಾತ್ರಿಹೊತ್ತು ರೂಪಗಳನ್ನು ನೋಡುವನು.
(ರೂಪ ಮತ್ತು ನೆರಳುಗಳು ಕಾಣಿಸದಂತೆ ಸಂಚರಿಸುವ ಎಂಟು ಯೋಗಗಳು)
೧. ಮೊರು ದಿವಸ ಉಪವಾಸಮಾಡಿ ,ಪುಷ್ಯ ನಕ್ಷತ್ರದಲ್ಲಿ ಶಸ್ತ್ರಾಘಾತದಿಂದ ಇಲ್ಲವೆ ಶೂಲಕ್ಕೇರಿಸಲ್ಪಟ್ಟು ಸತ್ತಪುರುಷನ ತಲೆ ಬುರುಡೆಯಲ್ಲಿ ಮಣ್ಣಿನೊಳಗೆ ಗೋಧಿಯನ್ನು ಬಿತ್ತಿ ಕುರಿಯ ಹಾಲನ್ನೇರೆಯಬೇಕು ಅನಂತರ ಬೆಳೆದ ಗೋಧಿಯ ಮಾಲೆಯನ್ನು ಹಾಕಿಕೊಂಡರೆ ರೂಪಮತ್ತು ನೆರಳುಗಳನ್ನು ಮರೆಮಾಚಿಕೊಂಡು ಸಂಚರಿಸುವನು .
೨.ಮೊರು ದಿವಸ ಉಪವಾಸ ಮಾಡಿ ,ಪುಷ್ಯ ನಕ್ಷತ್ರದಲ್ಲಿ ನಾಯಿ ,ಬೆಕ್ಕು ,ಗೂಬೆ ಮತ್ತು ವಾಗುಲಿ ,ಇವುಗಳ ಬಲದ ಮತ್ತು ಎಡದ ಕಣ್ಣುಗಳನ್ನು ತಂದು ಪ್ರತ್ಯೇಕ ಪ್ರತ್ಯೇಕವಾಗಿ ಚೂರ್ಣಮಾಡಬೇಕು .ಅನಂತರ ಆಯಾಯ ಕಣ್ಣುಗಳಿಗೆ ಆಯಾಯ ಕಣ್ಣುಗಳಚೂರ್ಣವನ್ನು ಅಥವಾ ವ್ಯತ್ಯಾಸವಾಗಿ ಹಚ್ಚಿಕೊಂಡರೆ, ನೆರಳು ಮತ್ತು ರೂಪಗಳನ್ನು ಮರೆಸಿಕೊಂಡು ಸಂಚರಿಸುವನು
೩. ಮೊರು ದಿವಸ ಉಪವಾಸಮಾಡಿ ಪುಷ್ಯ ನಕ್ಷತ್ರದಲ್ಲಿ "ಪುರುಷಘಾತಿ" ಎಂಬ ಮರದ ಒಂದು ಗಿಣ್ಣಿನ ಕಡ್ಡಿಯನ್ನೂ ಮತ್ತು ಅಂಜನವನ್ನು ತಯಾರಿಸಬೇಕು. ಅನಂತರ ಹಿಂದೆ ಹೇಳಿದ ನಿಶಾಚರ ಪ್ರಾಣಿಗಳಲ್ಲೊಂದರ ಕಣ್ಣಿನ ಚೂರ್ಣದೊಡನೆ ಅದನ್ನು ಉಪಯೋಗಿಸಿದರೆ,ನೆರಳು ಮತ್ತು ರೂಪಗಳನ್ನು ಮರೆಸಿಕೊಂಡು ಸಂಚರಿಸುವನು .
೪.ಮೊರು ದಿವಸ ಉಪವಾಸಮಾಡಿ ,ಪುಷ್ಯ ನಕ್ಷತ್ರದ ದಿನ, ಕಪ್ಪು ಕಬ್ಬಿಣದ ಅಂಜನ ಪಾತ್ರೆಯನ್ನೂ ಕದಿರನ್ನೂ .ಅನಂತರ ನಿಶಾಚರ ಪ್ರಾಣಿಗಳಲ್ಲೊಂದರೆ ತಲೆಬುರುಡೆಯನ್ನೂ ಅಂಜನದಿಂದ ತುಂಬಿ ಸತ್ತ ಹೆಂಗಸೊಬ್ಬಳ ಯೋನಿಯೊಳಗೆ ಪ್ರವೇಶಿಸಿ ಸುಡಬೇಕು .ಅನಂತರ ಆ ಅಂಜನವನ್ನು ಪುಷ್ಯನಕ್ಷತ್ರದಲ್ಲೆತ್ತಿ ಹಿಂದೆ ತಯಾರಿಸಿದ ಕಬ್ಭಿಣದ ಅಂಜನ ಪಾತ್ರೆಯಲ್ಲಿಡಬೇಕು ಅದನ್ನು ಕಣ್ಣಿಗೆ ಲೇಪಿಸಿಕೊಂಡರೆ ರೂಪ ಮತ್ತು ನೆರಳುಗಳನ್ನು ಮರೆಸಿಕೊಂಡು ಸಂಚರಿಸುವನು.
೫.ಎಲ್ಲಿ ಅಗ್ನಿಹೋತ್ರವನ್ನಿಟ್ಟ ಬ್ರಾಹ್ಮಣನನ್ನು ಸುಟ್ಟಿರುವದು ಅಥವಾ ಸುಡುತ್ತಿರುವದನ್ನು ನೋಡುವನೋ ಅಲ್ಲಿ ಮೊರು ದಿವಸ ಉಪವಾಸ ಮಾಡಿ ಪುಷ್ಯನಕ್ಷತ್ರದಲ್ಲಿ ,ತಾನಾಗಿಯೇ ಸತ್ತ ಮನುಷ್ಯನ ಮೈಮೇಲಿನ ಬಟ್ಟೆಯಿಂದ ಚೀಲವನ್ನು ತಯಾರಿಸಿ ಅದರಲ್ಲಿ ಅಗ್ನಿಹೋತ್ರಿಯ ಚಿತಾಭಸ್ಮವನ್ನು ತುಂಬಿ ಅದನ್ನು ಕತ್ತಿಗೆ ಸುತ್ತಿಕೊಂಡರೆ ರೂಪ ಮತ್ತು ನೆರಳುಗಳು ಕಾಣಿಸದಂತೆ ತಿರುಗುವನು .
೬.ಬ್ರಾಹ್ಮಣನ ಪ್ರೇತಕಾರ್ಯದಲ್ಲಿ ಯಾವ ಗೋವನ್ನು ಕೊಲ್ಲುವರೋ ಅದರ ಎಲುಬು ಮತ್ತು ಮಜ್ಜಾ ಇವುಗಳ ಚೂರ್ಣದಿಂದ ಪೂರ್ಣವಾದ ಹಾವಿನ ತೊಗಲಿನ ಚೀಲದಿಂದ ಪಶುಗಳನ್ನು ಮರೆಮಾಡಬಹುದು .
೭.ಹಾವು ಕಚ್ಚಿ ಸತ್ತವನ ಬೂದಿಯಿಂದ ಪೂರ್ಣವಾದ ಪ್ರಚಲಕದ ತೊಗಲಿನ ಚೀಲದಿಂದ ಮೃಗಗಳನ್ನು ಕಣ್ಮರೆಗೊಳಿಸಬಹುದು
೮.ಗೂಬೆ ಮತ್ತು ವಾಗುಲಿಗಳ ಬಾಲ ,ಮಲ ,ಮಂಡಿ ಮತ್ತು ಎಲುಬುಗಳ ಚೂರ್ಣದಿಂದ ಪೂರ್ಣವಾದ, ಹಾವಿನ ತೊಗಲಿನ ಚೀಲವು ಪಕ್ಷಿಗಳನ್ನು ಕಣ್ಮರೆ ಮಾಡುವದು . ಹೀಗೆ ಎಂಟು ಅಂತರ್ಧಾನ (ಕಣ್ಮರೆಯ)ಪ್ರಯೋಗಗಳು .
(ನಿದ್ದೆ ಬರುವಂತೆಮಾಡುವ ನಾಲ್ಕು ಯೋಗಗಳಲ್ಲಿ ಮೂದಲಿನವೆರಡರ ಮಂತ್ರಗಳು)
ಬಲಿಂ ವೈರೋಚನಂ ವಂದೇ ಶತಮಾಯಂ ಚ ಶಂಬರಮ್
ಭಂಡೀರಪಾಕಂ ನರಕಂ ಕುಂಭಮೇವಚ ||೩೫೨||
ದೇವಲಂ ನಾರದಂ ವಂದೇ ವಂದೇ ಸಾವರ್ಣೀಗಾಲವಮ್ |
ಏತೇಷಾಮನುಯೋಗೇನ ಕೃತಂ ತೇ ಸ್ವಾಪನಂ ಮಹತ್ ||೩೫೩||
ಯಥಾಸ್ವಪಂತ್ಯಜಗರಾಃ ಸ್ವಪಂತ್ಯಪಿಚಮೊಖಲಾಃ |
ತಥಾಸ್ವಪಂತು ಪುರುಷಾ ಯೇ ಚಗ್ರಾಮೇ ಕುತುಹಲಾಃ ||೩೫೪||
ಭಂಡಕಾನಾಂ ಸಹಸ್ರೇಣ ರಥನೇಮಿಶತೇನಚ |
ಇಮಂಗೃಹಂ ಪ್ರವೇಕ್ಷ್ಯಾಮಿ ತೂಷ್ಣೀಮಾಸಂತು ಭಾಂಡಕಾಃ||೩೫೫||
ನಮಸ್ಕೃತ್ವಾಚ ಮನವೇ ಬದ್ದ್ವಾ ಶುನಕಫೇಲಕಾಃ |
ಯೇದೇವಾ ದೇವಲೋಕೇಷು ಬ್ರಾಹ್ಮಣೇಷು ಚ ಬ್ರಾಹ್ಮಣಾ || ೩೫೬||
ಅಧ್ಯಯನ ಪಾರಗಾಸ್ಸಿದ್ಧಾ ಯೇಚಕೈಲಾಸ ತಾಪಸಾಃ |
ಏತೇಭ್ಯಸ್ಸರ್ವ ಸಿದ್ಧೇಭ್ಯಃ ಕೃತಂ ತೇ ಸ್ವಾಪನಂ ಮಹತ್|| ೩೫೭||
ಅತಿಗಚ್ಛತಿಚಮಯ್ಯಪಗಚ್ಚಂತು ಸಂಹತಾಃ |
ಅಲಿತೇ ಪಲಿತೇ ಮನವೇ ಸ್ವಾಹಾ ||೩೫೮||
(ಮೇಲೆ ಹೇಳಿದ ಮಂತ್ರಗಳ ಮೂದಲನೆಯ ಪ್ರಯೋಗ )
ಇದರ ಪ್ರಯೋಗ- ಮೊರು ದಿವಸ ಉಪವಾಸ ಮಾಡಿ ಪುಷ್ಯ ನಕ್ಷತ್ರಯೋಗವುಳ್ಳ ಕೃಷ್ಣಪಕ್ಷದ ಚತುರ್ದಶಿಯಲ್ಲಿ ಚಂಡಾಲ ಸ್ತ್ರೀಯ ಕೈಯಿಂದ ಬೆಕ್ಕಿನ ಜಾತಿಗೆ ಸೇರಿದ ಪ್ರಾಣಿಯ ಮಾಂಸವನ್ನು ಕೊಂಡುಕೊಳ್ಳಬೇಕು . ಅದನ್ನು ಉದ್ದಿನ ಕಾಳು ಗಳೊಡನೆ ಕುಡಿಕೆಯಲ್ಲಿಟ್ಟು ,ಯಾರಿಗೂ ಗೊತ್ತಾಗದಂತೆ ಸ್ಮಶಾನದಲ್ಲಿ ಹೂಳಬೇಕು. ಅದರ ಮುಂದಿನ ಚತುರ್ದಶಿಯಲ್ಲಿ ಅದನ್ನು ಹೊರತೆಗೆದು ಕನ್ಯೆಯ ಕೈಯಿಂದ ಅರೆಸಿ ಗುಳಿಗೆಗಳನ್ನು ತಯಾರಿಸಬೇಕು. ಅನಂತರ ಒಂದು ಗುಳಿಗೆಯನ್ನು ಮೇಲಿನ ಮಂತ್ರದಿಂದ ಅಭಿಮಂತ್ರಿಸಿ ಈ ಮಂತ್ರಗಳನಚರಿಸುತ್ತ ಎಲ್ಲಿ ಎಸೆಯುವನೋಅಲ್ಲಿನವರೆಲ್ಲರೂ ನಿದ್ರಿಸುವಂತೆ ಅದು ಮಾಡುವದು .
(ಮೇಲಿನ ಮಂತ್ರಗಳ ಎರಡನೆಯ ಪ್ರಯೋಗ )
ಇದೇ ಕಲ್ಪದಿಂದ ಮೊರು ಕಡೆ ಕಪ್ಪು ಮತ್ತು ಮೊರು ಕಡೆ ಬಿಳುಪು ಇರುವ ನಾಯಿ , ಹುಲಿ ,ಮತ್ತು ಶಲ್ಯಕ ಎಂಬ ಪ್ರಾಣಿಗಳನ್ನು ಸ್ಮಶಾಲದಲ್ಲಿ ಇನ್ನಾವ ಪ್ರಾಣಿಯನ್ನೂ ಹೊಳದ ಸ್ಥಳದಲ್ಲಿ ಹೊಳಬೇಕು. ಎರಡನೆಯ ಚತುರ್ದಶಿಯಲ್ಲಿ ಅದನ್ನೆತ್ತಿ ಚಿತಾಭಸ್ಮದೊಡೆನೆ ಮೇಲೆ ಹೇಳಿದ ಮಂತ್ರಗಳನ್ನುಚ್ಚರಿಸುತ್ತಾ ಎಲ್ಲೆಲ್ಲಿ ಎಸೆಯುವನೋ ಅಲ್ಲಿರುವವರೆಲ್ಲ ನಿದ್ರಿಸುವರು .
(ಮೊರನೆಯ ನಿದ್ರಾಯೋಗದ ಮಂತ್ರ)
ಸುವರ್ಣಪುಷ್ಟೀಂ ಬ್ರಹ್ಮಾಣೀಂ ಬ್ರಹ್ಮಾಣಂ ಚ ಕುಶಧ್ವಜಮ್ |
ಸರ್ವಾಶ್ಚದೇವತಾವಂದೇ ವಂದೇ ಸರ್ವಾಂಶ್ಚ ತಾಪಸಾಣನ್ ||೩೫೯||
ವಶಂ ಮೇ ಬ್ರಾಹ್ಮಣಾಯಾಂತು ಭೂಮಿಪಾಲಶ್ಚ ಕ್ಷತ್ರಿಯಾಃ |
ವಶಂ ವೈಶ್ಯಾಶ್ಚ ಶೂದ್ರಾಶ್ಚ ವಶತಾಂ ಯಾಂತು ಮೇಸದಾ ಸ್ವಾಹಾ || ||೩೬೦||
ಅಮಿಲೇ ಕಿಮಿಲೇ ,ವಸುಜಾರೇ ಪ್ರಯೋಗೇ
ಫಕ್ಕೇ ವಯುಹ್ಜೇ ವಿಹಾಲೇ ದಂತಕಟಕೇ ಸ್ವಾಹಾ||
ಸುಖಂ ಸ್ವಪಂತು ಶುನಕಾ ಯೇ ಚ ಗ್ರಾಮೇ ಕುತೂಹಲಾಃ |
ಶ್ವಾವಿಧಃ ಶಲ್ಯಕಂ ಚೈತತ್ ತ್ರಿಶ್ವೇತಂ ಬ್ರಹ್ಮನಿರ್ಮಿತಮ್ ||೩೬೧||
ಪ್ರಸುಪ್ತಾಸ್ಸರ್ವ್ವಸಿದ್ಧಾಹಿ ಏತ ತ್ತೇಸ್ವಾಪನಂ ಕೃತಮ್ ||
ಯಾವದ್ಗ್ರಾಮಸ್ಯಸೀಮಾಂತಃ ಸೂರ್ಯ ಸ್ಯೋದ್ಗಮನಾದಿತಿ ||೩೬೨||
ಸ್ವಾಹಾ ||
(ಮೇಲಿನ ಮಂತ್ರದ ಪ್ರಯೋಗ )
ಇದರ ಪ್ರಯೋಗ- ಮೊರುಕಡೆ ಬೆಳ್ಳಗಿರುವ ,ನಾಯಿ ,ಹುಲಿ ಮತ್ತು ಶಲ್ಯಕಗಳನ್ನು ತಂದು ಏಳು ದಿವಸ ಉಪವಾಸಮಾಡಿ ಕೃಷ್ಣಪಕ್ಷದ ಚತುರ್ದಶಿಯಲ್ಲಿ ಖದಿರಸಮಿತ್ತು ಗಳಿಂದ ಅಗ್ನಿಯನ್ನು ತಯಾರಿಸಿ ಮೇಲಿನ ಮಂತ್ರದಿಂದ ಜೇನು ಮತ್ತು ತುಪ್ಪಗಳಿಂದ ನೊರೆಂಟು ಆಹುತಿ ಕೊಡಬೇಕು ಅನಂತರ ಒಂದು ಮೇಲಿನ ಮಂತ್ರದಿಂದ ಮಂತ್ರದಿಂದ ಗ್ರಾಮದ್ವಾರ ಅಥವಾ ಗೃಹದ್ವಾರದಲ್ಲಿ ಎಲ್ಲಿ ಹೊಳಲ್ಪಡುತ್ತದೋ ಅಲ್ಲಿರುವವರೆಲ್ಲರನ್ನು ನಿದ್ರೆಗೊಳಿಸುವದು .
(ನಾಲ್ಕನೆಯ ನಿದ್ರಾಯೋಗದ ಮಂತ್ರ)
ಬಲಿಂ ವೃಯೋಚನಂ ವಂದೇ ಶತಮಾಯಂ ಚ ಶಂಬರಮ್ |
ನಿಕುಂಭಂ ನರಕಂ ತಂತುಕಚ್ಛಂ ಮಹಾಸುರಮ್ ||೩೬೩||
ಆಮಾಲವಂ ಪ್ರಮೀಲಂಚ ಮಂಡೋಲೂಕಂ ಘಟೋಬಲಂ |
ಕೃಷ್ಣಕಂ ಸೋಪಚಾರಂಚ ಪೌಲೋಮಿಂಚಯಶಸ್ವಿನೀಂ || ೩೬೪||
ಅಭಿಮಂತ್ರಯ್ಯ ಗೃಹ್ಣಾಮಿ ಸಿದ್ಧಾರ್ಥಂ ಶವಶಾರಿಕಾಂ |
ಜಯಂತು ಜಯತಿ ಚನಮಃ ಶಲಕ ಭೂತೇಭ್ಯಃ ಸ್ವಾಹಾ
ಸುಖಂ ಸ್ವಪಂತು ಶುನಕಾಯೇಚ ಗ್ರಾಮೇ ಕುತೂಹಲಾಃ ||೩೬೫||
ಸುಖಂ ಸ್ವಪಂತು ಸಿದ್ಧಾರ್ಥಾ ಯಮರ್ಥಂ ಮಾರ್ಗಯಾಮಹೇ
ಯಾವದಸ್ತಮಯಾದುದಯೋ ಯಾವದರ್ಥಂ ಫಲಂ, ಮಮ || ೩೬೬||
ಇತಿ ಸ್ವಾಹಾ ||
(ಈ ಮಂತ್ರದ ಪ್ರಯೋಗ )
ಇದರ ಪ್ರಯೋಗ -ನಾಲ್ಕುದಿನ ಸಾಯಂಕಾಲದವರೆಗೆ ಉಪವಾಸಮಾಡಿ ಕೃಷ್ಣಪಕ್ಷದ ಚತುರ್ದರ್ಶಿಯ ದಿನ ಸ್ಮಶಾನದಲ್ಲಿ ಯಾರಿಗೂ ತಿಳಿಯದಂತೆ ಬಲಿಯನ್ನು ಕೊಟ್ಟು , ಸತ್ತಶಾರಿಕೆಯೆಂಬ ಪಕ್ಷಿಯನ್ನು ಮೇಲಿನ ಮಂತ್ರದಿಂದ ತೆಗದುಕೊಂಡು ಬಟ್ಟೆಯ ತುಂಡಿನಲ್ಲಿ ಪೊಟ್ಟಣವನ್ನು ಕಟ್ಟಬೇಕು. ಅದರ ಮಧ್ಯದಲ್ಲಿ ನಾಯಿ ,ಹುಲಿ ಮತ್ತು ಶಲ್ಯಕವನ್ನು ಸೇರಿಸಿ ,ಈ ಮಂತ್ರದಿಂದ ಎಲ್ಲಿ ಹುಗಿಯುತ್ತೇವೋ ಅಲ್ಲಿರುವವರನ್ನೆಲ್ಲ ನಿದ್ರೆಗೀಡು ಮಾಡುತ್ತದೆ.
(ಮುಚ್ಚಿದ ಬಾಗಿಲನ್ನು ತೆಗೆಯಿಸುವ ಮಂತ್ರ)
ಉಷೈಮಿ ಶರಣಂ ಚಾಗ್ನಿಂ ದೈವತಾನಿ ದಿಶೋದಶ |
ಅಪಯಂತುಚ ಸರ್ವಾಣಿ ವಶತಾಂ ಯಾತುಮೇ ಸದಾ ||೩೬೭||
ಸ್ವಾಹಾ||
(ಈ ಮಂತ್ರದ ಪ್ರಯೋಗ )
ಇದರ ಪ್ರಯೋಗ- ಮೊರು ದಿನಗಳು ಉಪವಾಸ ಮಾಡಿ ಪುಷ್ಯನಕ್ಷತ್ರವಿರುವ ದಿನ ತಲೆಯ ಎಲುಬು ಅಥವಾ ಹರಳು ಕಲ್ಲುಗಳನ್ನು ಇಪ್ಪತ್ತೊಂದು ರಾಶಿ ಮಾಡಿ ಜೇನುತುಪ್ಪ ಮತ್ತು ಹಸುವಿನ ತುಪ್ಪಗಳಿಂದ ಹೋಮ ಮಾಡಬೇಕು ಅನಂತರ ಗಂಧ ಮತ್ತು ಮಾಲ್ಯಗಳಿಂದ ಪೂಜೆಮಾಡಿ ಹೊಳಬೇಕು. ಎರಡನೆಯ ಪುಷ್ಯನಕ್ಷತ್ರದಿಂದ ಹೊರತೆಗೆದು ,ಒಂದು ಕಲ್ಲನ್ನು ಅಭಿಮಂತ್ರಿಸಿ ಅದರಿಂದ ಬಾಗಿಲನ್ನು ಹೊಡೆಯಬೇಕು ನಾಲ್ಕು ಕಲ್ಲುಗಳನ್ನು ಹೊಡೆದರೆ ಒಳಗಿನ ಬಾಗಿಲು ತೆರೆಯಲ್ಪಡುವುದು.
(ಮೇಲಿನ ಮಂತ್ರದ ಇನ್ನೊಂದು ವಿಧ ಪ್ರಯೋಗ)
ನಾಲ್ಕು ದಿನಗಳು ಸಾಯಂಕಾಲದವರೆಗೆ ಉಪವಾಸಮಾಡಿ ,ಕೃಷ್ಣಪಕ್ಷದ ಚತುರ್ದಶಿಯಂದು ,ಕೈಕಾಲು ಮುರಿದುಕೊಂಡು ಸತ್ತ ಪುರುಷನ ಅಸ್ಥಿಯಿಂದ ಒಂದು ಎತ್ತನ್ನು ಮಾಡಿಸಬೇಕು .ಅದನ್ನೀ ಮಂತ್ರದಿಂದ ಅಭಿಮಂತ್ರಿಸಬೇಕು. ಎರಡು ಎತ್ತುಗಳನ್ನು ಹೂಡಿದ ಎತ್ತಿನ ಗಾಡಿಯು ತರಲ್ಪಡುವದು .ಅನಂತರ ಆಕಾಶದಲ್ಲಿ ಸಂಚರಿಸುವನು.
(ಬಾಗಿಲನ ಕೀಲನ್ನು ತೆಗೆಯುವ ಮತ್ತು ನಿದ್ರೆ ತರಿಸುವ ಮಂತ್ರ)
ಸದಾರವಿರವಿಃ ಸಗಂಡ ಪರಿಘಾತಿ ಸರ್ವಂಭಣಾತಿ
ಚಂಡಾಲೀಕುಂ ಭೀತುಂಬಕಟುಕ ಸಾರೀಘಃ ಸನಾರೀಭಗೋಸಿ ಸ್ವಾಹಾ ||೩೬೭||
ಈ ಮಂತ್ರವು ಬಾಗಿಲಿನ ಕೀಲನ್ನು ತೆಗೆಯುವದು ಮತ್ತು ಜನರನ್ನು ನಿದ್ರೆಗೆ ಗುರಿ ಮಾಡುವುದು.
(ಬಿಲ್ಲಿನ ಹಗ್ಗವು ಕತ್ತರಿಸುವಂತೆ ಮಾಡುವ ಯೋಗ )
ಮೊರು ದಿವಸ ಉಪವಾಸಮಾಡಿ ಪುಷ್ಯನಕ್ಷತ್ರದ ದಿವಸ ಶಸ್ತ್ರದಿಂದ ಹತನಾದ ಇಲ್ಲವೇ ಶೂಲಕ್ಕೇರಿಸಲ್ಪಟ್ಟ ಪುರುಷನ ತಲೆ ಬುರುಡೆಯಲ್ಲಿ ಮಣ್ಣು ತುಂಬಿ ತೊಗರಿಯನ್ನು ಬಿತ್ತಿ ನೀರುಹಾಕಿ ಬೆಳಸಬೇಕು. ಬೆಳೆದಮೇಲೆ ಪುಷ್ಯನಕ್ಷತ್ರದಲ್ಲೇ ತೆಗೆದು ಅದರ ನಾರಿನಿಂದ ಹಗ್ಗವನ್ನು ಹೊಸೆಯಬೇಕು .ಅನಂತರ, ಹೆದೆಯೇರಿಸಲ್ಪಟ್ಟ ಬಿಲ್ಲುಗಳ ಮತ್ತು ಯಂತ್ರಗಳ ಎದುರಿನಲ್ಲಿ ಅದನ್ನು ಕತ್ತರಿಸಿದರೆ ಎದುರಿನಲ್ಲಿರುವದರ ಹಗ್ಗವು ತಾನಾಗಿಯೇ ಕತ್ತರಿಸುವದು .
(ಮೊಗು ಮತ್ತು ಬಾಯಿಗಳನ್ನು ಕಟ್ಟಿಸುವ ಯೋಗಗಳು )
ನೀರು ಹಾವಿನ ಚರ್ಮದ ಚೀಲವನ್ನು ,ಸ್ತ್ರೀ ಅಥವಾ ಪುರುಷನ ,ಉಚ್ಛಾಸ ಮೃತ್ತಿಕೆಯಿಂದ ತುಂಬಬೇಕು. ಅದು ಮೊಗು ಕಟ್ಟುವಂತೆ ಮತ್ತು ಬಾಯಿ ಹಿಡಿಯುವಂತೆ ಮಾಡುವದು.
(ಮಲಬಂಧನ ,ಕುರುಡು ,ಸಾವು ,ಮತ್ತು ಜೀವನಕ್ಕೆ ದಾರಿಯಿಲ್ಲದಂತಾಗಲು ಮಾಡುವ ಯೋಗಗಳು)
ಹಂದಿಯ ಬಸ್ತಿಯ ಚೀಲವನ್ನು ಉಚ್ಛ್ವಾಸಮೃತ್ತಿಕೆಯಿಂದ ತುಂಬಿ ಮಂಗನ ಸ್ನಾಯುವಿನಿಂದ ಕಟ್ಟಬೇಕು ಅದು ಮಲಬದ್ಧತೆಯಿಂದ ಹೊಟ್ಟೆಯುಬ್ಬರಿಸುವಂತೆ ಮಾಡುವದು.
ಕೃಷ್ಣಪಕ್ಷದ ಚತುರ್ದಶಿಯಲ್ಲಿ ಶಸ್ತ್ರದಿಂದ ಕೊಲ್ಲಲ್ಲಟ್ಟ ಕಪಿ ಲಾಗೋವಿನ ಪಿತ್ತದಿಂದ "ರಾಜವೃಕ್ಷದ ಕಟ್ಟಿಗೆಯಿಂದ ತಯಾರಿಸಿದ ಶತ್ರುವಿನ ಪ್ರತಿಮೆ "ಗೆ ಲೇಪಿಸಬೇಕು ಅದರಿಂದ ಶತ್ರುವು ಕುರುಡನಾಗುವನು.
ನಾಲ್ಕು ದಿನಗಳು ಸಾಯಂಕಾಲದವರೆಗೆ ಉಪವಾಸಮಾಡಿ ಕೃಷ್ಣಪಕ್ಷದ ಚತುದರ್ಶಿಯಲ್ಲಿ ಬಲಿಯನ್ನು ಕೊಟ್ಟು ಶೂಲಕ್ಕೇರಿಸಲ್ಪಟ್ಟ ಪುರುಷನ ಅಸ್ಥಿಯಿಂದ ಕೀಲಗಳನ್ನು ತಯಾರಿಸಬೇಕು .ಅವುಗಳಲ್ಲೊಂದು ಮಲ ಅಥವಾ ಮೊತ್ರದಲ್ಲಿ ಹೊಳಲ್ಪಟ್ಟಿದೆ ಮಲಬದ್ಧತೆಯಿಂದ ಹೊಟ್ಟೆಯೊದುವಂತೆ ಮಾಡುವದು ಅವನು ಹೆಜ್ಜೆಯಿಡುವ ಇಲ್ಲವೆ ಕುಳಿತು ಕೊಳ್ಳುವ ಸ್ಥಳದಲ್ಲಿ ಹೂಳಿದರೆ ಅವನ ಶರೀರವನ್ನೊಣಗಿಸಿ ಸಾಯಿಸುವದು ಅವನ ಅಂಗಡಿ ,ಜಮೀನು ಅಥವಾ ಮನೆಗಳಲ್ಲಿ ಹೂಳಿದರೆ ಜೀವನಕ್ಕೆ ವಿಚ್ಛೇದನವುಂಟಾಗುವಂತೆ ಮಾಡುವುದು.
ಸಿಡಿಲಿನ ಹೊಡೆತದಿಂದ ಸುಡಲಾರ ಮರದ ಕೀಲುಗಳಿಗೂ ಮೇಲಿನ ಲೇಪ (ಕಲ್ಕ)ವನ್ನು ಹಚ್ಚಿ ಪ್ರಯೋಗಿಸಿದರೆ ಇದೇ ಫಲವೆಂದು ಹೇಳಿದಂತೆಯೇ ಆಯಿತು .
(ಸಾಯಿಸುವದು ಮತ್ತು ಹುಚ್ಚುಹಿಡಿಸುವದೇ ಮುಂತಾದ ಯೋಗಗಳು )
ಪುನರ್ನನಮವಾಚೀನಂ ನಿಂಬಃ ಕಾಮಕಧುಶ್ಚಯಃ
ಕಪಿರೋಮ ಮನುಷ್ಯಾಸ್ಥಿ ಬದ್ಧ್ವಾಮೃತಕ ವಾಸಸಾ ||೩೬೮||
ನಿಖನ್ಯತೇ ಗೃಹೇಯಸ್ಯ ದೃಷ್ಟ್ವಾವಾಯಂ ಪ್ರಪಾತಯೇತ್ |
ಪುತ್ರದಾರಸ್ಸಧನಃ ತ್ರೀನ್ ಪಕ್ಷಾನ್ನಾತಿವರ್ತತೇ ||೩೬೯||
ಪುನರ್ನವಮ ವಾಚೀನಂ ನಿಂಬಃ ಕಾಮಧುಶ್ಚಯಃ
ಸ್ವಯಂ ಗುಪ್ತಾ ಮನುಷ್ಯಾಸ್ಥಿ ಪದೇಯಸ್ಯ ನಿಖನ್ಯತೇ ||೩೭೦||
ದ್ವಾರೇಗ್ಯಹಸ್ಯ ಸೇನಾಯಾಃ ಗ್ರಾಮಸ್ಯ ನಗರಸ್ಯವಾ
ಸಪುತ್ರದಾರಸ್ಸಧನಃ ತ್ರೀನ್ ಪಕ್ಷಾನ್ನಾತಿವರ್ತತೇ ||೩೭೧||
ಅಜಮರ್ಕಟರೋಮಾಣಿ ಮಾರ್ಜಾರ ನಕುಲಸ್ಯ ಚ
ಬ್ರಾಹ್ಮಣಾನಾಂ ಶ್ವಪಾಕಾನಾಂ ಕಾಕೋಲೂಕಸ್ಯಚಾssಹರೇತ್ ||೩೭೨||
ಏತೇನ ವಿಷ್ಠಾವಕ್ಷುಣ್ಣಾ ಸದ್ಯುತ್ಪಾದಕಾರಿಕಾ
ಪ್ರೇತನಿರ್ಮಾಲಿಕಾ ಕಿಣ್ವಂ ರೋಮಾಣಿ ನಕುಲಸ್ಯ ಚ || ೩೭೩||
ವೃಶ್ಚಿಕಾಲ್ಯಹಿಕೃತ್ತಿಶ್ಚ ಪದೇಯಸ್ಯ ನಿಖನ್ಯತೇ
ಭವತ್ಯಪುರುಷಸ್ಸದ್ಯೋ ಯಾವತ್ತನ್ನಾಪನೀಯತೇ ||೩೭೪||
ಶೋಥಘ್ನಿ, ನಿಂಬ ,ಕಾಮಮಧು ,ಮಂಗನಕೂದಲು ,ಮನುಷ್ಯನ ಎಲುಬು ,ಇವುಗಳನ್ನು ಸತ್ತ ಹೆಣದ ಮೈಮೇಲಿನ ಬಟ್ಟೆಯಲ್ಲಿ ಯಾರ ಮನೆಯಲ್ಲಿ ಹೊಳುತ್ತಾರೋ ಅಥವಾ ಅವುಗಳನ್ನರೆದು ಯಾರಿಗೆ ಕುಡಿಸುತ್ತಾರೋ ಅವನು ಹೆಂಡಿರು ಮಕ್ಕಳು ಮತ್ತು ಧನ ರಹಿತನಾಗಿ ಒಂದೂವರೆ ತಿಂಗಳ ಮೇಲೆ ಉಳಿಯುವದಿಲ್ಲ .
ಶೋಥಘ್ನಿ ,ನಿಂಬ ,ಕಾಮಮಧು ,ಕಚ್ಚೂರ ಮತ್ತು ಮನುಷ್ಯರ ಎಲುಬು ಇವುಗಳನ್ನು ಸೇರಿಸಿ ಯಾರು ಹೆಜ್ಜೆಯಿಡುವ ಸ್ಥಳದಲ್ಲಿ ಅಥವಾ ಮನೆಯ ಬಾಗಿಲಲ್ಲಿ ,ಸೈನ್ಯಶಿಬಿರದಲ್ಲಿ ,ಗ್ರಾಮ ಇಲ್ಲವೆ ನಗರ ದ್ವಾರಗಳಲ್ಲಿ ಹೂಳಿದರೆ ಆ ಮನುಷ್ಯನು ತನ್ನ ಮಕ್ಕಳು ಹೆಂಡಿರು ಮತ್ತು ಧನ ಸಹಿತನಾಗಿ ಒಂದೂವರೆ ತಿಂಗಳ ಮೇಲೆ ಉಳಿಯುವದಿಲ್ಲ.
ಆಡು ,ಕಪಿ,ಬೆಕ್ಕು ,ಮುಂಗಸಿ ,ಬ್ರಾಹ್ಮಣ ,ಚಾಂಡಾಲ ,ಕಾಗೆ ಮತ್ತು ಗೂಬೆಗಳ ರೋಮಗಳನ್ನು ತಂದು ಯಾರ ಮಲದೊಡನೆ ಅರೆಯುತ್ತಾನೋ ಅವನು ಕೂಡಲೇ ಮರಣ ಹೊಂದುತ್ತಾನೆ .
ಶವನಿರ್ಮಾಲ್ಯ ,ಮದ್ಯದ ಬೀಜ ,ಮುಂಗಸಿಯ ಕೂದಲು ,ಚೇಳು ,ಅಲಿ (ಒಂದು ಜಾತಿಯ ಚೇಳು) ಮತ್ತು ಹಾವುಗಳ ಚರ್ಮವನ್ನು ಯಾರು ಹೆಜ್ಜೆಯಿಡುವ ಸ್ಥಳದಲ್ಲಿ ಹುಗಿಯಲ್ಪಡುತ್ತದೋ ಅವನು ಅದನ್ನು ತೆಗೆಯುವವರೆಗೆ ಪೌರುಷವಿಲ್ಲದವನಾಗುತ್ತಾನೆ.
(ಅನ್ನಾದಿಗಳು ಕ್ಷಯಿಸದಿರುವ ಅಕ್ಷಯ ಪಾತ್ರೆಯನ್ನು ತಯಾರಿಸುವ ವಿಧಾನ)
ಮೊರುದಿನ ದಿನ ಉಪವಾಸಮಾಡಿ ,ಪುಷ್ಯನಕ್ಷತ್ರದ ದಿವಸ,ಶಸ್ತ್ರಘಾತದಿಂದ ಇಲ್ಲವೇ ಶೂಲಕ್ಕೇರಿಸಲ್ಪಟ್ಟ ಸತ್ತ ಪುರುಷನ ,ಶಿರಃ ಕಪಾಲದಲ್ಲಿ ಮಣ್ಣನ್ನು ತುಂಬಿ ಗುಲಗಂಜಿಯನ್ನು ಬಿತ್ತಿ ನೀರೆರೆಯಬೇಕು. ಅದು ಬೆಳೆದ ಮೇಲೆ ,ಪುಷ್ಯನಕ್ಷತ್ರವಿರುವ ಅಮಾವಾಸ್ಯೆ ಅಥವಾ ಹುಣ್ಣಿಮೆಯಲ್ಲಿ ಗುಲುಗಂಜಿಯ ಬಳ್ಳಿಗಳನ್ನು ತೆಗೆದುಕೊಂಡು ಬಂದು ಗುಂಡಾಗಿ ಸಿಂಬಿಗಳನ್ನು ಮಾಡಬೇಕು ಅವುಗಳ ಮೇಲಿಟ್ಟ ಅನ್ನ ,ಪಾನಗಳ ಪಾತ್ರೆಗಳಲ್ಲಿನ ಪದಾರ್ಥಗಳು ಕ್ಷಯಿಸುವದಿಲ್ಲ .
(ಗ್ರಾಮದಲ್ಲಿರುವ ಎಲ್ಲ ಬೆಣ್ಣೆಯೊ ತಾನಾಗಿ ಒಂದು ಕಡೆ ಬರಲು ಪ್ರಯೋಗ )
ರಾತ್ರಿ ನಾಟಕಾದಿಗಳು ಪ್ರವೃತ್ತವಾದಾಗ ,ದೊಡ್ಡ ದೀಪದ ಬೆಂಕಿಯಲ್ಲಿ ಸತ್ತ ಹಸುವಿನ ಮೂಲೆಗಳನ್ನು ಕಿತ್ತು ಸುಡಬೇಕು . ಆ ಸುಟ್ಟ ಮೂಲೆಗಳನ್ನು ಎತ್ತಿನ ಮೊತ್ರದೊಡನೆ ಅರೆದು ಹೊಸ ಗಡಿಗೆಯೊಳಗೆ ಲೇಪಿಸಬೇಕು. ಅದನ್ನು ಯಾವ ಊರಿಗೆ ಆಪ್ರದಕ್ಷಿಣಾಕಾರವಾಗಿ ಸುತ್ತಿಸಿ ,ತಂದಿರಿಸಿದರೆ ಆ ಊರಿನಲ್ಲಿ ಎಲ್ಲಿದ್ದ ಬೆಣ್ಣೆಯೆಲ್ಲಾ ಆ ಗಡಿಗೆಯೊಳಗೆ ಬಂದು ಬೀಳುವದು .
(ಗಿಡದೊಳಗಿನ ಹಣ್ಣುಗಳು ತಾನಾಗಿ ಕೈಗೆ ಬಂದು ಬೀಳುವ ಪ್ರಯೋಗ )
ಪುಷ್ಯನಕ್ಷತ್ರದೊಡನೆ ಕೂಡಿದ ಕೃಷ್ಣಪಕ್ಷದ ಚತುರ್ದಶಿಯಂದು ಮದೋನ್ಮತ್ತವಾದ ನಾಯಿಯ ಯೋನಿಯಲ್ಲಿ ಕಪ್ಪು ಕಬ್ಬಿಣದ ಮುದ್ರಿಕೆಯನ್ನು ಹಾಕಬೇಕು. ತಾನು ತಾನಾಗಿಯೇ ಕೆಳಗೆ ಬಿದ್ದ ಅದನ್ನು ತೆಗೆದುಕೊಳ್ಳಬೇಕು ಅದರಿಂದ ಮರದೊಳಗಿನ ಹಣ್ಣುಗಳನ್ನು ಕರೆದರೆ ಕೈಸೇರುವವು.
(ಮಂತ್ರ ಮತ್ತು ಔಷಧಿಯೋಗಗಳ ಪ್ರಯೋಗ ಸ್ಥಳ ಮತ್ತು ಫಲ )
ಮಂತ್ರ ಭೈಷಜ್ಯ ಸಂಯುಕ್ತಾ ಯೋಗ ಮಾಯಾಕೃತಾಶ್ಚಯೇ|
ಉಪಹನ್ಯಾದಮಿತ್ರಾಂಸ್ತೈಃ ಸ್ವಜನಂಚಾಭಿ ಪಾಲಯೇತ್||೩೭೫||
ಮಂತ್ರ ಮತ್ತು ಔಷಧಿಗಳಿಂದ ಕೂಡಿದ ಮತ್ತು ಮಾಯಾಕೃತಗಳಾದ ಯಾವ ಯೋಗಗಳು ಹೇಳಲ್ಪಟ್ಟಿವೆಯೋ ಅವುಗಳಿಂದ ಶತ್ರುಗಳನ್ನು ಕೊಲ್ಲಬೇಕು ಮತ್ತು ಸ್ವಜನರನ್ನು ಚನ್ನಾಗಿ ಪರಿಪಾಲಿಸಬೇಕು .
ಹೀಗೆ "ಪರಮರಹಸ್ಯಗಳು" ಎಂಬ ಹದಿನಾಲ್ಕನೆಯ ಅಧಿಕರಣದಲ್ಲಿ "ಪ್ರಲಂಭನದಲ್ಲಿ ಔಷಧಿ ಮತ್ತು ಮಂತ್ರಗಳ ಪ್ರಯೋಗ "ಎಂಬ ನೂರ ನಲವತ್ತೆಂಟನೆಯ ಅಧ್ಯಾಯ ಮುಗಿದುದು.
No comments:
Post a Comment